ಮಂಗಳೂರಿನಲ್ಲಿ MIR ನೆಟ್ ಝೀರೋ ಶೃಂಗಸಭೆ ಉದ್ಘಾಟನೆ ಕಾರ್ಬನ್ ನ್ಯೂಟ್ರಲ್ ನಗರಗಳ ನಿರ್ಮಾಣಕ್ಕೆ ಜಾಗತಿಕ ಚಿಂತನೆ
ಮಂಗಳೂರು, ಫೆ.20:ಭಾರತದ ಕಾರ್ಬನ್ ನ್ಯೂಟ್ರಲ್ ಭವಿಷ್ಯದ ನಗರಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯಾಗಿ MIR ನೆಟ್ ಝೀರೋ ಶೃಂಗಸಭೆ ಉದ್ಘಾಟನೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು.
ಕಾರ್ಯಕ್ರಮದಲ್ಲಿ ಅಭಯ್ ಭಕ್ರೆ, BEE ಡೈರೆಕ್ಟ್ ಜನರಲ್, ಟಿ.ಡಿ. ರಾಜೇಗೌಡ,ಶಾಸಕರು ಶೃಂಗೇರಿ, ರಫೆಲೋ ಮೊರ್ರಾಜ್ಜೊ,
ಸಿಇಒ ಮಿರ್
ಗ್ರೂಪ್, ಜಿಯಾಂದೋ ಮೆಡಿಕೋ ಮಿಲನೋ (GIANDO medico milano, Consulate general Italy,)ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೋಕುಲದಾಸ್ ನಾಯಕ್, ಪ್ರೊ. ಬಿ.ರವಿ, ಡೈರೆಕ್ಟರ್, NITK ಸೂರ್ಯನಾರಾಯಣ್ , ಸಿಇಒ MSEZ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶೃಂಗಸಭೆಯಲ್ಲಿ ಭಾರತ ಮತ್ತು ಇಟಲಿಯಿಂದ ಆಗಮಿಸಿದ ಅತಿಥಿಗಳು,
ವಾಸ್ತುಶಿಲ್ಪಿಗಳು, ನಗರ ಯೋಜಕರು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಭಾಗವಹಿಸಿ, ಕಾರ್ಬನ್–ನ್ಯೂಟ್ರಲ್ ನಗರಗಳು ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಸಿದರು.
